Posted on 08-11-2025 |
Share: Facebook | X | Whatsapp | Instagram
*ಕನಕದಾಸ ಜಯಂತಿಯ ಅಂಗವಾಗಿ ಡಿ ವಿ ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ವೆಂಕಟೇಶ್ ರವರು\"ಕನಕ ನಮಗೆ ಜಾತಿಯಿಂದ ಮುಖ್ಯವಾಗಬಾರದು, ಅವರ ನಡೆ-ನುಡಿ, ಅವರ ಕೀರ್ತನೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿ ಕೊಳ್ಳಬೇಕು ಎಂದರು.
ಡಿವಿಎಸ್ ಕಾಲೇಜಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ. ಪ್ರಾಂಶುಪಾಲರಾದ. ಡಾ. ಎಂ ವೆಂಕಟೇಶ್, ಐ ಕ್ಯೂ ಎ ಸಿ ಸಂಯೋಜಕರಾದ ಕುಮಾರಸ್ವಾಮಿ, ಕೇತನ ಆರ್ತಿ, ರಾಜೀವ್,ಕನ್ನಡ ವಿಭಾಗದ ಡಾ. ಡಿ. ಬಿ. ಶಿವರುದ್ರಪ್ಪ, ಡಾ ಎಸ್. ಕೆ. ಮಂಜುನಾಥ್,ಉಪಸ್ಥಿತರಿದ್ದರು.
*ಕಾರ್ಯಕ್ರಮ ದಲ್ಲಿ ಕನಕದಾಸ ರ ಕೀರ್ತಿನೆಗಳಲ್ಲೂ ವಿದ್ಯಾರ್ಥಿಗಳು ಮತ್ತು ಬೋದಕೇತರ ವರ್ಗದವರು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಭಿನಯ ಮತ್ತು ಲಾವಣ್ಯ ಸಹಾಯಕ ಪ್ರಾಧ್ಯಾಪಕರು ನಿರ್ವಹಿಸಿದರು. ಸ್ವಾಗತವನ್ನು ಹರ್ಷಿತ,ವಂದನೆಯನ್ನು ರಮ್ಯಾ ಮಾಡಿದರು.ದ*ಸಂಪನ್ಮೂಲ ವ್ಯಕ್ತಿ ಡಾ. ಮೋಹನ್ -\"ಕನಕದಾಸರು ಒಬ್ಬ ಸಂತ ಕವಿಯಾಗಿದ್ದು, ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಮಹಾತ್ಮರು \"ಎಂದು ತಿಳಿಸಿದರು.
ಮುಖ್ಯ ಅತಿಥಿ -\" ನಮ್ಮ ಅರಿವಿನ ವಿಸ್ತಾರ ಮಾಡಿದವರಲ್ಲಿ ದಾಸಶ್ರೇಷ್ಠರು ಕನಕರು. ಇವರ ಸಾಹಿತ್ಯ ವು ಭಿನ್ನ ವಾಗಿದ್ದು ನಮ್ಮ ತಿಳುವಳಿಕೆಯನ್ನು ನವಿಕರಿಸುತ್ತದೆ ಎಂದರು.
*ಅತಿಥಿ:ಗಣೇಶ್ ಬಿಳಗಿ ಯವರು, \"ಕನಕ ದಾಸರ ಸಾಮಾಜಿಕ ಕೊಡುಗೆ ಅಪಾರವಾಗಿದೆ. ಕನಕ ದಾಸರ ಕಾಲದ ಬಗ್ಗೆ ಭಿನ್ನ ಅಭಿಪ್ರಾಯಗಳಿದ್ದರೂ, ಕನಕನ ವಿಚಾರಗಳ ಬಗ್ಗೆ ಆಕ್ಷೇಪಣೆ ಗಳಿರಬಾರದು\" ಎಂದು ಹೇಳಿದರು.