ದೇಸಿದಿನ ಸಾಂಸ್ಕೃತಿಕ ಸಂಭ್ರಮ

Culture Literature

Posted on 17-07-2025 |

Share: Facebook | X | Whatsapp | Instagram


ದೇಸಿದಿನ ಸಾಂಸ್ಕೃತಿಕ ಸಂಭ್ರಮ

ದೇಸಿದಿನ ಸಾಂಸ್ಕೃತಿಕ ಸಂಭ್ರಮ 


ಶಿವಮೊಗ್ಗ : ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಳಿ ಹೆಚ್ಚಿರುವ ಇಂದಿನ ದಿನಮಾನದಲ್ಲಿ ದೇಸಿ ಸಂಸ್ಕೃತಿ‌ಯನ್ನು ಅಳವಡಿಸಿಕೊಳ್ಳುವ ತುರ್ತಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ. ಜಗನ್ನಾಥ ಕೆ. ಡಾಂಗೆ ಅಭಿಪ್ರಾಯ‌ಪಟ್ಟರು. 

ಕನ್ನಡ ಭಾರತಿ ಶುಕ್ರವಾರ ಏರ್ಪಡಿಸಿದ್ದ \'ದೇಸಿದಿನ ಸಾಂಸ್ಕೃತಿಕ ಸಂಭ್ರಮ\' ಕಾರ್ಯಕ್ರಮವನ್ನು ಬುದ್ಧ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ನೆಲದ ಸಂಸ್ಕೃತಿ‌ಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ‌ಯಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದ ಕುಲಸಚಿವ ಎ.ಎಲ್. ಮಂಜುನಾಥ್,  ಹಳ್ಳಿಯ ಸೊಗಡಿನಲ್ಲಿ ಬದುಕಿನ ಸವಿ ಇದೆ. ಹಳ್ಳಿಯ ಬದುಕನ್ನು ಗೌರವಿಸಿ, ಪ್ರೀತಿಯಿಂದ ಅಪ್ಪಿಕೊಳ್ಳಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಕಾರ್ಯಕ್ರಮ‌ದ ಅಧ್ಯಕ್ಷತೆ ವಹಿಸಿ,  ಹಗಲು ರಾತ್ರಿ ಇರುವಂತೆ ಕಷ್ಟಸುಖಗಳು ಸಹ ಬದುಕಿನ‌ಲ್ಲಿ ನಿರಂತರವಾಗಿ ಇರುತ್ತವೆ.  ಅವುಗಳನ್ನು ಎದುರಿಸುವ ಸಾಮರ್ಥ್ಯವನ್ನು ಸಾಹಿತ್ಯದ ಓದು ನೀಡಬಲ್ಲುದು. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳಲು ಇಂಥ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ತಿಳಿಸಿದರು. 

ಹಿರಿಯ ಪ್ರಾಧ್ಯಾಪಕ ಪ್ರೊ. ಪ್ರಶಾಂತ ನಾಯಕ ಉಪಸ್ಥಿತರಿದ್ದರು. ವಿದ್ಯಾರ್ಥಿ‌ನಿ ರಿಯಾಷಾ  ಪ್ರಾರ್ಥನೆ ಮಾಡಿದರು. ತನುಶ್ರೀ ಸ್ವಾಗತಿಸಿದರು. ನಮೀತಾ ನಿರೂಪಿಸಿದರು. ವೇದಿಕೆ ಕಾರ್ಯಕ್ರಮ‌ದ ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Search